ಹಾರೈಕೆ

ಜೀವನವೆಂದರೆ ಹಾಗೀಗಲ್ಲ
ಅದೊಂದು ಸುಂದರ ಕವಿತೆ.
ದುಃಖ ದುಮ್ಮಾನ ಅರಿತೇ
ಪ್ರೀತಿ ಪ್ರೇಮ ಒಸರುವ ಒರತೆ.

ಜೀವನವೆಂದರೆ ಹಾಗೀಗಲ್ಲ
ಅದೊಂದು ದೀರ್‍ಘ ಪ್ರಯಾಣ
ಹುಟ್ಟಿನಿಂದ ಸಾವಿನವರೆಗೆ
ನಮ್ಮ ನಿಮ್ಮೊಡನೆ ಸಹಪ್ರಯಾಣ.

ಜೀವನವೆಂದರೆ ಹಾಗೀಗಲ್ಲ
ಅದೊಂದು ಹೃದಯ ಹೃದಯಗಳ ಸೇರಿಕೆ.
ಹಾಲುಜೇನು ಬೆರೆತಂತೆ
ಒಂದಕ್ಕೊಂದು ಹೊಂದುವಂತಹ ಬೆರಕೆ.

ಜೀವನವೆಂದರೆ ಹಾಗೀಗಲ್ಲ
ಅದೊಂದು ಕಾಣದ ಕೈ ಆಡುವ ಆಟ
ನಾವದರಲಿ ಸೂತ್ರಧಾರನ ದಾರಕೆ ಕಟ್ಟಿದ
ಪಾತ್ರಧಾರಿಗಳು ಮಾತ್ರ.

ಜೀವನವೆಂದರೆ ಹಾಗೀಗಲ್ಲ
ಅದೊಂದು ಉರಿಯುವ ಹಣತೆ
ನೋವುಗಳುರಿದು ಸಂತಸ ಚೆಲ್ಲುವ
ಹಣತೆ ಸಾಲಿನ ಬೆಳಕಿನ ಗಾಥೆ

ಎಲ್ಲೆಲ್ಲೂ ಮುಸುಕಿರುವ
ಕತ್ತಲೆ ಕಳಚಿ ಬೆಳಕ ಚೆಲ್ಲಲು
ಉರಿಯಲಿ ಹಣತೆಗಳು ಸದಾ
ಆರದಿರಲಿ ಬೆಳಕು, ಬೆಳಗಲಿ ಜೀವನದ ಹಾದಿ.

ಮೂಡಿಸಲಿ ಎಲ್ಲರಲಿ ಜೀವನದ ಅರಿವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನ್ನ ಹಳಿದರೆ ಲೋಕ ಅದು ನಿನ್ನ ತಪ್ಪಲ್ಲ
Next post ಬೋನಸ್

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

cheap jordans|wholesale air max|wholesale jordans|wholesale jewelry|wholesale jerseys